Monday, November 27, 2017

ಅರ್ಧ ಕನಸು


ಬೆಳ್ಗೆ ಇನ್ನು ೬ ಗಂಟೆ, ಕನ್ಸಲ್ ಇವತ್  ಶನಿವಾರ್ ಸಂತೆ,
ಒಂದು ಕಡೆಗೆ ಪೀಪಿ ಸೌಂಡು, ಎಲ್ಲಿ ನೋಡ್ದ್ರೂ ಹೆಂಗ್ಸ್ರ್ ದಂಡು.
ಉದ್ದ ಉದ್ದ ಬದ್ನೇಕಾಯಿ ನೋಡ್ತಾ ಇತ್ತು ನನ್ನೇ ನಾಯಿ.
ಸಿಕ್ಕಿದ್ದೆಲ್ಲಾ ಎತ್ತಿಕೊಂಡೆ  ಕೆಂಪಿ ಬಸ್ಸನ್ ಹತ್ತಿಕೊಂಡೆ

ಬಹಳ ಜನರ ಜಂಗುಳಿಯಲಿ ಜನಮನದ ಆರ್ತನಾದ ಕೇಳಿದರೂ ಲೆಕ್ಕಿಸದೆ ಕಡೆಗಣಿಸಿ,  ಕಟ್ಟಕಡೆಗೆ ನಿಂತ ನನ್ನ ನೋಟದಲ್ಲೇ ದಿಟ್ಟಿಸುತ್ತಾ ಎದುರು  ಬಂದು ಹೇಳ್ತಾ ಇದ್ದ  ಟಿಕೆಟ್ ಟಿಕೆಟ್ ಟಿಕೆಟ್ಟು ತಗೋಳಿ ಟಿಕೆಟ್ ಟಿಕೆಟ್ಟು.

ನೋಡ್ತಾ ನೋಡ್ತಾ ಬಂದೇಬಿಡ್ತು ನಮ್ಮ ಮನೆಯ ಹತ್ರದ್ ಸ್ಟಾಪ್ಪು
ಇಳ್ಯೋಕಂತ ಹೆಜ್ಜೆ ಇಟ್ರೆ ಕೊಡ್ತಾ ಇಲ್ಲ ಚೂರು ಗ್ಯಾಪು !!

ಮನೆಗ್ ೨ ಕಿಲೋಮೀಟರ್  ಸಿಕ್ಲೆ ಇಲ್ಲ ಯಾರದೂ ಮೋಟರ್
ಎರಡು ಕಡೆಗೆ ಕಯ್ಯ ಚೀಲ ಬಾಯಲ್ಲೊಂದು ಇತ್ತು ಕವಳ
announcement : ತಂಬಾಕು ರಹಿತ ಕವಳ ಆರೋಗ್ಯಕ್ಕೆ ಹಾನಿಕರವಲ್ಲ!!

 ಮನೆಗೆ ಬಂದ್ರೆ ಅಂಗಳ ಕ್ಲೀನು ಸುಬ್ಬಿ ಸಗಣಿಲ್ ಚೇಂಜ್ಡ್ ದ  ಸೀನು.
ತೋಟದಿಂದ ದೊಡ್ಡಪ್ಪ ಕೂಗ್ತಿದ್ದದ್ದು ಕೇಳ್ತಪ್ಪ. .
ಕೊಟ್ಗೆಲ್  ಯಾರರೋ  ಹೋಯ್ ,ಕೊಟ್ಗೆಲ್  ಯಾರರೋ  ಹೋಯ್  ಹೋಯ್  .
ದನ ಬಂದು ಕಟ್ಕಳಿ, ಹಾಲು ಗೀಲು  ಕರ್ಕಳಿ.

ಆನ್ ಆಗೋದೇ ಮರೆತು ಬಿಟ್ಟ ಮಿಕ್ಸರ್ ಹಿಡ್ಕೊಂಡ್ ಹೊರಟೆ ಬಿಟ್ಟ
ಸ್ಪ್ಲೆಂಡರ್ ಗಾಡಿಯಲ್ಲಿ ಬಾವ, ಅವನ ಹೆಸರೇ ವಾಸುದೇವ!!

೬ನೇ ಕ್ಲಾಸ್ಸಿನ್ ಸೀತೆ ಓದ್ತಾ ಇದ್ಲು ಗೀತೆ
"ಜನಕೆ ಸಂತಸವೀವ . .ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ ಬಿಡದೆ !! "

ಹೋಮಕ್ಕೆಲ್ಲ ಸಿಧ್ಧ ಮಾಡಿ ಕನ್ನಡಿಯಲಿ ಗಡ್ಡ ನೋಡಿ
ಅಣ್ಣ ಬಾಳೆ ಕೊಯ್ದು ತಂದ, ಆಗ್ಲೇ ಬಂತು ಭಟ್ರ ತಂಡ

ಬೇಗ ಸ್ನಾನ ಮಾಡಿ ಬಂದೆ ಲೇಟ್ ಆಗೋಯ್ತು ಅಂದ್ರು ತಂದೆ 
ಕೇಸರಿ ಮಡಿಗೆ  ಹಳದಿ ಶಾಲು, ಭಟ್ರ ಬಾಯಲ್ ಮಂತ್ರ ಚಾಲು. 

ಹೋಮದ್ ಮುಂದೆ ಕುಂತು ಕುಂತು ಸಿಕ್ಕಾಪಟ್ಟೆ ಬೆವರು ಬಂತು 
ಭಟ್ರ ಬಾಯಲ್  ಪಟಕ್ ಹೇಳಿ ಒಂದು ಪಂಚಿಂಗ್ ಲೈನು ಬಂತು. 

"ಪ್ರಥಮ ಬಾರಿ ಪರಶುರಾಮನ ಪರಿಧಿ ದಾಟಿ ಹೋಗುವ  ಪರದೇಶದ ಪಯಣದಲ್ಲಿ ಫಲ ಸಿಗಲಿ ಪರಮಾತ್ಮ" ಎಂದು ಪರಮೇಶ್ವರನಲ್ಲಿ ಪ್ರಾರ್ಥನೆ ಮಾಡ್ಕೋ

ಎಕರೆಗಟ್ಲೆ ತೋಟದಲ್ಲಿ ಬಿದ್ದ ಅಡಿಕೆ  ಹೆಕ್ಕೋರೆಲ್ಲಿ,
ಎಬ್ಸೆ ಬಿಟ್ಳು ಬೆಳ್ಬೆಳಿಗ್ಗೆ,  ಹಿಡಿಕುಂಟ್ ಹಿಡ್ಕಂಡ್ ಸುಜಾತತ್ಗೆ.

ಬ್ರಷ್ಷು ಮಾಡ್ತಾ ಉಗುಳುವಾಗ ಬಾಡಿ ಸ್ವಲ್ಪ ಬೆಂಡಿಂಗು
ಬೇರೆ ದೇಶಕ್  ಹೋಗೋ ಕನಸು ಕನ್ಸಿನಲ್ಲೂ  ಪೆಂಡಿಂಗು. 

No comments:

Post a Comment