Saturday, August 14, 2010

@! ಪ್ರಸಂಗದಲ್ಲಿನ ಅಧಿಕಗಳು !@

ದುಃಖವೂ ಸಂಭ್ರಮಿಸಲ್ಪಟ್ಟಾಗ ಸಂತೋಷದ ಸಮಾಧಿಯಾಗುತ್ತದೆ.


'ಕಲೆ'ಯಿಂದಾದ   "ಕಲೆ"ಯನ್ನು   ಅಳಿಸುವುದೂ   ಒಂದು   ಕಲೆ!!


"ದೇವರು" ಒಂದು ಕಾಲ್ಪನಿಕ ಸತ್ಯ.
 

 "ಕಾಮ"ವು ಪೂರ್ಣವಿರಾಮಕ್ಕೆ ಮುನ್ನುಡಿ !!



"ಪ್ರತಿಯೊಂದು ಪರಿಹಾರದ ಹಿಂದೆಯೂ ಒಂದು ಸಮಸ್ಯೆ ಇದ್ದೇ ಇರುತ್ತದೆ" 



" ಸಂಭ್ರಮಕ್ಕಿಲ್ಲ 'ಕೊನೆ' " ....
                       ಅಡಿಕೆ? ಬಾಳೆ??



"ಪ್ರೀತ್ಸೋರೆಲ್ಲ ಮದುವೆ ಆಗಕಾಗಲ್ಲ..
ಮದುವೆ ಆದವರೆಲ್ಲ ಪ್ರೀತಿಸಲೇ ಬೇಕಂತಿಲ್ಲ..
ಗೊತ್ತಿದ್ದೂ ಮಾಡೋ ತಪ್ಪಿಗೆ ಅನಿವಾರ್ಯವಾಗಿ ಪ್ರೀತಿಸಬೇಕಾಗುತ್ತದೆ"
- ತಂತ್ರಾಂಶ ತಂತ್ರಜ್ಞ ತನ್ನ ಕೆಲಸದ ಕುರಿತು..



No comments:

Post a Comment